ಆದಿಕಾಂಡ 18:1-33

  • ಮೂರು ದೇವದೂತರಿಂದ ಅಬ್ರಹಾಮನ ಭೇಟಿ (1-8)

  • ಸಾರಗೆ ಮಗ ಹುಟ್ತಾನೆ ಅನ್ನೋ ಭವಿಷ್ಯವಾಣಿ, ಸಾರ ನಕ್ಕಳು (9-15)

  • ಸೊದೋಮ್‌ ಪಟ್ಟಣಕ್ಕಾಗಿ ಅಬ್ರಹಾಮನ ಮನವಿ (16-33)

18  ಆಮೇಲೆ ಯೆಹೋವ*+ ಅಬ್ರಹಾಮನಿಗೆ ಕಾಣಿಸಿಕೊಂಡನು. ಆಗ ಅಬ್ರಹಾಮ ಮಮ್ರೆಯ ದೊಡ್ಡ ಮರಗಳ ಹತ್ರ+ ತನ್ನ ಡೇರೆಯ ಬಾಗಿಲಲ್ಲಿ ಕೂತಿದ್ದ. ಅದು ಮಧ್ಯಾಹ್ನದ ಸಮಯ, ಬಿಸಿಲು ಸುಡ್ತಿತ್ತು.  ಅವನು ತಲೆಯೆತ್ತಿ ನೋಡಿದಾಗ ಸ್ವಲ್ಪ ದೂರದಲ್ಲಿ ಮೂರು ಗಂಡಸರು ನಿಂತಿದ್ರು.+ ಕೂಡಲೇ ಅವನು ಡೇರೆ ಬಾಗಿಲಿಂದ ಓಡಿಹೋಗಿ ನೆಲದ ತನಕ ಬಗ್ಗಿ ಅವರಿಗೆ ನಮಸ್ಕಾರ ಮಾಡಿದ.  ಆಮೇಲೆ ಅಬ್ರಹಾಮ “ಯೆಹೋವನೇ,* ನಿನ್ನ ದಯೆ ನನ್ನ ಮೇಲಿರಲಿ. ದಯವಿಟ್ಟು ನಿನ್ನ ಸೇವಕನ ಡೇರೆಗೆ ಬರಬೇಕು.  ಕಾಲು ತೊಳೆಯೋಕೆ+ ನೀರು ತರ್ತಿನಿ. ಮರದ ಕೆಳಗೆ ವಿಶ್ರಾಂತಿ ಪಡ್ಕೊಳ್ಳಿ.  ನೀವು ನಿಮ್ಮ ಸೇವಕನ ಹತ್ರ ಬಂದಿರೋದ್ರಿಂದ ಸ್ವಲ್ಪ ರೊಟ್ಟಿ ತರ್ತಿನಿ. ಊಟ ಮಾಡಿ ಸ್ವಲ್ಪ ಆರಾಮ ಮಾಡಿ ಮುಂದೆ ಪ್ರಯಾಣ ಮಾಡಬಹುದು” ಅಂದ. ಅದಕ್ಕವರು “ಸರಿ, ನೀನು ಹೇಳಿದ ಹಾಗೆ ಮಾಡು” ಅಂದ್ರು.  ಆಗ ಅಬ್ರಹಾಮ ಡೇರೆಯಲ್ಲಿದ್ದ ಸಾರಳ ಹತ್ರ ಓಡಿಹೋಗಿ “ನೀನು ಮೂರು ಸೆಯಾ* ನುಣ್ಣಗಿನ ಹಿಟ್ಟು ನಾದಿ ಬೇಗಬೇಗ ರೊಟ್ಟಿ ಮಾಡು” ಅಂದ.  ಆಮೇಲೆ ಹಿಂಡಿನ ಹತ್ರ ಓಡಿಹೋಗಿ ಎಳೇ ಕರುಗಳಲ್ಲಿ ಒಂದು ಒಳ್ಳೇ ಗಂಡು ಕರು ಆರಿಸ್ಕೊಂಡು ಸೇವಕನ ಕೈಗೆ ಕೊಟ್ಟ. ಅವನು ಬೇಗ ಅಡಿಗೆ ಮಾಡೋಕೆ ಶುರುಮಾಡಿದ.  ಆಮೇಲೆ ಅಬ್ರಹಾಮ ಬೆಣ್ಣೆ, ಹಾಲು ಮತ್ತು ಮಾಂಸದ ಅಡಿಗೆ ತಂದು ಅವರ ಮುಂದಿಟ್ಟ. ಅವರು ಮರದ ಕೆಳಗೆ ಊಟ ಮಾಡ್ತಿದ್ದಾಗ ಅವರ ಹತ್ರ ನಿಂತ್ಕೊಂಡ.+  ಅವರು ಅವನಿಗೆ “ನಿನ್ನ ಹೆಂಡತಿ ಸಾರ ಎಲ್ಲಿ?”+ ಅಂದಾಗ “ಇಲ್ಲೇ ಡೇರೆಯಲ್ಲಿದ್ದಾಳೆ” ಅಂದ. 10  ಆಗ ಅವರಲ್ಲಿ ಒಬ್ಬ “ಮುಂದಿನ ವರ್ಷ ಇದೇ ಸಮಯಕ್ಕೆ ನಾನು ನಿನ್ನ ಹತ್ರ ಖಂಡಿತ ಬರ್ತಿನಿ. ಆಗ ನಿನ್ನ ಹೆಂಡತಿ ಸಾರಗೆ ಒಬ್ಬ ಮಗ ಇರ್ತಾನೆ”+ ಅಂದ. ಆ ಪುರುಷನ ಹಿಂದೆ ಡೇರೆ ಬಾಗಿಲಲ್ಲಿ ನಿಂತಿದ್ದ ಸಾರ ಅವರ ಮಾತು ಕೇಳಿಸ್ಕೊಳ್ತಾ ಇದ್ದಳು. 11  ಅಬ್ರಹಾಮ ಸಾರಗೆ ತುಂಬ ವಯಸ್ಸಾಗಿತ್ತು.+ ಸಾರಳಿಗೆ ಮಕ್ಕಳಾಗೋ ವಯಸ್ಸು ದಾಟಿಹೋಗಿತ್ತು.*+ 12  ಹಾಗಾಗಿ ಸಾರ ಒಳಗೊಳಗೆ ನಗ್ತಾ “ನಾನು ಮುದುಕಿ, ನನ್ನ ಯಜಮಾನಗೂ ವಯಸ್ಸಾಗಿದೆ. ಈ ವಯಸ್ಸಲ್ಲಿ ನನಗೆ ಇಂಥ ಸಂತೋಷ ಸಿಗುತ್ತಾ?”+ ಅಂದ್ಕೊಂಡಳು. 13  ಆಗ ಯೆಹೋವ ಅಬ್ರಹಾಮನಿಗೆ “ಸಾರ ಯಾಕೆ ನಕ್ಕಳು? ‘ಮುದುಕಿಯಾಗಿರೋ ನನಗೆ ನಿಜವಾಗ್ಲೂ ಮಗು ಹುಟ್ಟುತ್ತಾ’ ಅಂತ ಯಾಕೆ ಹೇಳಿದಳು? 14  ಯೆಹೋವನಿಂದ ಆಗದೇ ಇರೋದು ಏನಾದ್ರೂ ಇದ್ಯಾ?+ ಮುಂದಿನ ವರ್ಷ ಇದೇ ಸಮಯಕ್ಕೆ ನಿನ್ನ ಹತ್ರ ಬರ್ತಿನಿ. ಆಗ ಸಾರಗೆ ಒಬ್ಬ ಮಗ ಇರ್ತಾನೆ” ಅಂದ. 15  ಆಗ ಸಾರ ಹೆದರಿ “ಇಲ್ಲ ಸ್ವಾಮಿ, ನಾ ನಗಲಿಲ್ಲ” ಅಂದಳು. ಅದಕ್ಕೆ ಆತನು “ಇಲ್ಲ, ನೀ ನಗಾಡಿದೆ” ಅಂದ. 16  ಆಮೇಲೆ ಅವರು ಅಲ್ಲಿಂದ ಹೊಗ್ತಾ ಇದ್ದಾಗ ಅಬ್ರಹಾಮ ಅವರ ಜೊತೆ ಅರ್ಧ ದಾರಿ ತನಕ ಹೋದ. ಅವರು ಅಲ್ಲಿಂದ ಸೊದೋಮ್‌ ಪಟ್ಟಣ ನೋಡಿದ್ರು.+ 17  ಆಗ ಯೆಹೋವ ಹೀಗೆ ಅಂದ್ಕೊಂಡನು: “ನಾನು ಮಾಡೋ ವಿಷ್ಯನ ಅಬ್ರಹಾಮಗೆ ಹೇಳಬೇಕು,+ ಅವನಿಂದ ಮುಚ್ಚಿಡಬಾರದು. 18  ಅಬ್ರಹಾಮನಿಂದ ಬಲಿಷ್ಠವಾದ ದೊಡ್ಡ ಜನಾಂಗ ಬರುತ್ತೆ, ಅವನಿಂದಾಗಿ ಭೂಮಿಯ ಎಲ್ಲ ಜನ್ರಿಗೆ ಆಶೀರ್ವಾದ ಸಿಗುತ್ತೆ ಅಂತ ನಾನು ಹೇಳಿದ್ದೀನಿ.+ 19  ಅಬ್ರಹಾಮನ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ನ್ಯಾಯನೀತಿ ನಡೆಸೋ ಮೂಲಕ ಯೆಹೋವನ ದಾರಿ ಅನುಸರಿಸಬೇಕು ಅಂತ ಅವನು ತನ್ನ ಮಕ್ಕಳಿಗೆ,+ ತನ್ನೆಲ್ಲ ವಂಶದವರಿಗೆ ಆಜ್ಞೆ ಕೊಡ್ತಾನೆ ಅಂತ ನನಗೆ ಭರವಸೆ ಇದೆ. ಅವನು ಹಾಗೆ ಮಾಡೋದ್ರಿಂದ ಯೆಹೋವನಾದ ನಾನು ಅವನಿಗೆ ಕೊಟ್ಟ ಮಾತನ್ನ ನಿಜ ಮಾಡ್ತೀನಿ.” 20  ಆಮೇಲೆ ಯೆಹೋವ “ಸೊದೋಮ್‌ ಮತ್ತು ಗೊಮೋರದಲ್ಲಿರೋ ಜನ್ರ ಪಾಪ ತುಂಬ ದೊಡ್ಡದಾಗಿದೆ,+ ನಾನು ಅವರ ಬಗ್ಗೆ ತುಂಬ ಕೇಳಿಸ್ಕೊಂಡಿದ್ದೀನಿ.+ 21  ಕೇಳಿಸ್ಕೊಂಡಿದ್ದು ನಿಜನಾ, ಅವರು ಅಷ್ಟು ಕೆಟ್ಟವ್ರಾ ಅಂತ ನಾನೇ ಹೋಗಿ ನೋಡಿ ತಿಳ್ಕೊಳ್ತೀನಿ”+ ಅಂದನು. 22  ಆಮೇಲೆ ಆ ಪುರುಷರು ಅಲ್ಲಿಂದ ಸೊದೋಮ್‌ ಕಡೆಗೆ ಹೋದ್ರು. ಆದ್ರೆ ಯೆಹೋವ+ ಅಬ್ರಹಾಮನ ಜೊತೆನೇ ಇದ್ದನು. 23  ಅಬ್ರಹಾಮ ಆತನ ಹತ್ರ ಬಂದು “ನೀನು ಕೆಟ್ಟವರ ಜೊತೆ ನೀತಿವಂತರನ್ನೂ ನಾಶಮಾಡ್ತೀಯಾ?+ 24  ಆ ಪಟ್ಟಣದಲ್ಲಿ 50 ಜನ ನೀತಿವಂತರು ಇದ್ರೆ ನೀನು ಆ ಪಟ್ಟಣ ನಾಶಮಾಡ್ತೀಯಾ? ಆ 50 ನೀತಿವಂತರಿಗೋಸ್ಕರ ಆ ಪಟ್ಟಣದವರನ್ನ ಕ್ಷಮಿಸೋದಿಲ್ವಾ? 25  ಕೆಟ್ಟವರ ಜೊತೆ ನೀತಿವಂತರನ್ನ ನಾಶಮಾಡಿದ್ರೆ ನೀತಿವಂತರಿಗೂ ಕೆಟ್ಟವರಿಗೂ ಒಂದೇ ಗತಿ ಆಗುತ್ತಲ್ವಾ?+ ಹಾಗೆ ನೀನು ಯಾವತ್ತೂ ಮಾಡೋದಿಲ್ಲ. ಅದು ನಿನ್ನಿಂದ ಯೋಚಿಸಕ್ಕೂ ಆಗದೇ ಇರೋ ವಿಷ್ಯ.+ ಇಡೀ ಭೂಮಿಯ ನ್ಯಾಯಾಧೀಶನಾದ ನೀನು ಸರಿಯಾಗಿರೋದನ್ನೇ ಮಾಡ್ತೀಯಲ್ಲಾ?”+ ಅಂದ. 26  ಅದಕ್ಕೆ ಯೆಹೋವ “ಸೊದೋಮಲ್ಲಿ ನನಗೆ 50 ನೀತಿವಂತರು ಸಿಕ್ಕಿದ್ರೆ ಅವರಿಗೋಸ್ಕರ ಆ ಪಟ್ಟಣದವರನ್ನೆಲ್ಲ ಕ್ಷಮಿಸ್ತೀನಿ” ಅಂದನು. 27  ಮತ್ತೆ ಅಬ್ರಹಾಮ “ಧೂಳು ಬೂದಿ ಆಗಿರೋ ನಾನು ಯೆಹೋವನ ಜೊತೆ ಮಾತಾಡೋಕೆ ಧೈರ್ಯ ಮಾಡಿದ್ದೀನಿ. ನಾನು ಹೇಳೋದನ್ನ ದಯವಿಟ್ಟು ಕೇಳು. 28  ಒಂದುವೇಳೆ ಅಲ್ಲಿ 50 ಜನ್ರಿಲ್ಲ, 45 ಜನ ಇದ್ರೆ ಇಡೀ ಪಟ್ಟಣ ನಾಶಮಾಡ್ತೀಯಾ?” ಅಂದ. ಅದಕ್ಕೆ ದೇವರು “45 ನೀತಿವಂತರು ಸಿಕ್ಕಿದ್ರೆ ನಾನು ಆ ಪಟ್ಟಣನ ನಾಶಮಾಡಲ್ಲ”+ ಅಂದನು. 29  ಮತ್ತೆ ಅಬ್ರಹಾಮ “ಒಂದುವೇಳೆ ಅಲ್ಲಿ 40 ಜನ ನೀತಿವಂತರಿದ್ರೆ?” ಅಂತ ಕೇಳಿದ. ಅದಕ್ಕೆ ದೇವರು “40 ಜನ ಇದ್ರೆ ಅವರಿಗೋಸ್ಕರ ನಾನು ಆ ಪಟ್ಟಣನ ಉಳಿಸ್ತೀನಿ” ಅಂದನು. 30  ಮತ್ತೆ ಅಬ್ರಹಾಮ “ಯೆಹೋವ, ನನಗೆ ಇನ್ನೂ ಮಾತಾಡೋಕಿದೆ. ದಯವಿಟ್ಟು ಕೋಪ ಮಾಡ್ಕೊಬೇಡ.+ ಒಂದುವೇಳೆ 30 ಜನ ಮಾತ್ರ ಸಿಕ್ಕಿದ್ರೆ?” ಅಂದ. “ಅಲ್ಲಿ 30 ಜನ ಸಿಕ್ಕಿದ್ರೆ ಅದನ್ನ ನಾಶಮಾಡಲ್ಲ” ಅಂತ ದೇವರು ಅಂದನು. 31  ಮತ್ತೆ ಅಬ್ರಹಾಮ “ಯೆಹೋವ, ನಾನು ನಿನ್ನ ಹತ್ರ ಮಾತಾಡೋಕೆ ಧೈರ್ಯ ಮಾಡಿದ್ದೀನಿ. ದಯವಿಟ್ಟು ನಾನು ಹೇಳೋದು ಕೇಳು. ಒಂದುವೇಳೆ ಅಲ್ಲಿ ಬರೀ 20 ಜನ ಸಿಕ್ಕಿದ್ರೆ?” ಅಂದ. ಅದಕ್ಕೆ ದೇವರು “20 ಜನ ಸಿಕ್ಕಿದ್ರೆ ಅವರಿಗೋಸ್ಕರ ನಾನು ಅದನ್ನ ಉಳಿಸ್ತೀನಿ” ಅಂದನು. 32  ಕೊನೆಗೆ ಅಬ್ರಹಾಮ “ಯೆಹೋವ, ನಾನು ಇನ್ನು ಒಂದೇ ಒಂದು ಸಾರಿ ಮಾತಾಡ್ತೀನಿ. ದಯವಿಟ್ಟು ಕೋಪ ಮಾಡ್ಕೋಬೇಡ. ಒಂದುವೇಳೆ ಅಲ್ಲಿ ಹತ್ತು ಜನ ಮಾತ್ರ ಸಿಕ್ಕಿದ್ರೆ?” ಅಂದ. ಅದಕ್ಕೆ ಆತನು “ಹತ್ತು ಜನ ಸಿಕ್ಕಿದ್ರೂ ನಾನು ಆ ಪಟ್ಟಣನ ಉಳಿಸ್ತೀನಿ” ಅಂದನು. 33  ಯೆಹೋವ ಅಬ್ರಹಾಮನ ಜೊತೆ ಮಾತಾಡಿದ ಮೇಲೆ ಹೋಗಿಬಿಟ್ಟನು.+ ಅಬ್ರಹಾಮ ತನ್ನ ಡೇರೆಗೆ ವಾಪಸ್‌ ಹೋದ.

ಪಾದಟಿಪ್ಪಣಿ

ಅಂದ್ರೆ, ಯೆಹೋವನನ್ನ ಪ್ರತಿನಿಧಿಸ್ತಿದ್ದ ಒಬ್ಬ ದೇವದೂತ.
ಇಲ್ಲಿ ಅಬ್ರಹಾಮ ನೇರವಾಗಿ ಯೆಹೋವನ ಜೊತೆನೇ ಮಾತಾಡ್ತಿದ್ದಾನೆ ಅನ್ನೋ ತರ ದೇವದೂತನ ಜೊತೆ ಮಾತಾಡಿದ.
ಸುಮಾರು 10 ಕೆ.ಜಿ. ಹಿಟ್ಟು. ಪರಿಶಿಷ್ಟ ಬಿ14 ನೋಡಿ.
ಅಕ್ಷ. “ಸಾರಳಿಗೆ ಮುಟ್ಟು ನಿಂತುಹೋಗಿತ್ತು.”